ಪೋಸ್ಟ್‌ಗಳು

ಫೆಬ್ರವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಾ. ಗೋವಿಂದ ಹೆಗಡೆ

ಇಮೇಜ್
       ವೃತ್ತಿಯಲ್ಲಿ ಅರಿವಳಿಕೆ ತಜ್ಞ, ಪ್ರವೃತ್ತಿಯಲ್ಲಿ ಕವಿ, ವಿಮರ್ಶಕ, ಚಿಂತಕ. ಗಜ಼ಲ್, ಕವಿತೆ, ಛಂದೋಬದ್ಧ ಕಾವ್ಯ, ಹೀಗೆ ಹಲವಾರು ಸಾಹಿತ್ಯದ ವಿಭಾಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಡಾ. ಗೋವಿಂದ ಹೆಗಡೆ. ಸುಮಾರು ಮೂರು ವರೆ ದಶಕಗಳಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಡಾ. ಗೋವಿಂದ ಹೆಗಡೆ ಅವರಿಗೆ ನಾಡಿನ ಹಲವಾರು ಹಿರಿಯ ಸಾಹಿತಿಗಳ ಹಾಗೂ ಕವಿಗಳ ಒಡನಾಟವಿದೆ. ಇದು, ಆಕಸ್ಮಿಕವಾಗಿ ಭೇಟಿಯಾದಾಗ ನಾನು ಹಾಗೂ ನನ್ನ ಮಡದಿ ಮೈತ್ರಿ, ಇಬ್ಬರೂ ಸೇರಿ ಹೊರತಂದ ನಮ್ಮ ಚೊಚ್ಚಲ ಗಜ಼ಲ್ ಸಂಕಲನ ಮಹತಿ ಯನ್ನು ಡಾ. ಗೋವಿಂದ ಹೆಗಡೆ ಅವರಿಗೆ ನೀಡಿದ ಸಂದರ್ಭ. 

ಜಿ ಸುಬ್ರಾಯ ಭಟ್ ಬಕ್ಕಳ

ಇಮೇಜ್
       ಕನ್ನಡಕ್ಕೆ ಗಜ಼ಲ್ ತಂದವರು ಶಾಂತರಸರು. ಆದರೆ ಕನ್ನಡದಲ್ಲಿ ಮೊದಲ ಗಜ಼ಲ್ ಸಂಕಲನವನ್ನು ತಂದವರು ಜಿ. ಸುಬ್ರಾಯ ಭಟ್ ಬಕ್ಕಳ. ನಮ್ಮ ಊರಿನವರೇ ಆದ ಇವರು, ಮಹತಿ ಗಜ಼ಲ್ ಸಂಕಲನದ ಬಿಡುಗಡೆಗೆ ಸಾಕ್ಷಿಯಾದದ್ದು ನನ್ನ ಸೌಭಾಗ್ಯ. ಕವಿ, ಬರಹಗಾರ, ಪತ್ರಕರ್ತ, ಕೃಷಿಕ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಕನ್ನಡಕ್ಕೆ ಮೊದಲ ಗಜ಼ಲ್ ಸಂಕಲನ ಕೊಟ್ಟ ಜಿ. ಸುಬ್ರಾಯ ಭಟ್ ಅವರ ಕೈಯಲ್ಲಿ ನನ್ನ ಮೊದಲ ಗಜ಼ಲ್ ಸಂಕಲನವನ್ನು ಇಟ್ಟ ಸಂದರ್ಭ. 

ಮಹತಿ ಗಜ಼ಲ್ ಸಂಕಲನ ಬಿಡುಗಡೆ

ಇಮೇಜ್
 ಮಹತಿ ಗಜ಼ಲ್ ಸಂಕಲನ ಬಿಡುಗಡೆಯಾದ ಸುದ್ದಿ ಪ್ರಕಟಿಸಿದ ಮಾಧ್ಯಮ ಮಿತ್ರರು. ಎಲ್ಲ ಮಾಧ್ಯಮ ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳು.